Saturday, November 15, 2014

ಕಲ್ಪನೆಗೊಂದು ಆಕಾರ

                            
1. By Using Invitation card :
     












      2. By Using News Paper :














      2. By Using Pista Shell Flower:

             


3.Using Quilling paper and CD










Friday, February 21, 2014

"ತೊರೆದರು ತನ್ನ ತೊರೆಯದು ಪ್ರಿಯನಾ"

                                            
ವಿಶಾಲವಾಗಿ ಹರಡಿಕೊ೦ಡಿರುವ ಈ ಸಮುದ್ರ,ತಾ ಮು೦ದು ತಾ ಮು೦ದು ಎ೦ದು ಎಡಬಿಡದೆ ದಡವನ್ನು ಬ೦ದೊಪ್ಪುವ ಅಲೆಗಳು,ಆ ಒಪ್ಪ್ಪುಗೆಗೆ ನಾಚಿಕೆಯಿ೦ದ ಒದ್ದೆಯಾದ ಮರಳು,ಕೆನ್ನೆ ಕೆ೦ಪಾಗಿಸಿಕೊ೦ಡ ಮುಗಿಲು,ಬಣ್ಣಗಳ ಈ ಒಕುಳಿಗಳ ನಡುವೆ ಅ೦ದಿನ ಕಾಯಕ ಮುಗಿದ ಹಾಗೆ ಅಸ್ತ್೦ಗತನಾಗುವ ಸೂರ್ಯ...ಯಾವುದು ನಮಗೆ ಹೊಸತಲ್ಲಾ...ಚಿಕ್ಕವರಿದ್ದಾಗಿ೦ದ ಸಮುದ್ರದ ದಡವನ್ನೇ ಆಟದ ಅಂಗಳವಾಗಿಸಿಕೊಂಡು ಬೆಳೆದವರು....ತುಂಬಾ ಕಾಲದ ನಂತರ ನನ್ನ ಬದುಕಿನ ಈ ಇಳಿಸಂಜೆಯಲಿ ಇಲ್ಲಿ ಬಂದು ಕೂತಿದ್ದರೂ ಆ ಚಿತ್ರಣ ಬದಲಾಗಿರಲಿಲ್ಲ....

ಅಬ್ಬಾ! ಈ ಕಡಲಿನ ಮೊರೆತ ನನ್ನ ಕೊರೆತ ತುಂಬ ಜೊರಾಗಿ ಅಪ್ಪಳಿಸುತ್ತಾ ಇದೆ ಅಂತಾ ನೀವು ಯೋಚಸ್ತಾ ಇದ್ದರೆ Track ಗೆ ಬಂದು ಬಿಡ್ತೀನಿ...ನಾನು ಶರಧಿ ಇಲ್ಲಿ ನಾನು ಕಾಯ್ತಾ ಇರೋದು ನನ್ನ ಬಾಲ್ಯದ ಗೆಳತಿ ಶ್ರಾವಣಿಗೋಸ್ಕರ....

ತುಂಬಾ ವರ್ಷಗಳ ನಂತರ ಅದೂ ನಿಮ್ಮ ಜೀವನ ಎಲ್ಲ ರೀತಿಯ ಸುಖ ದುಃಖಗಳನ್ನು ನೋಡಿ ಖಾಲಿ ಖಾಲಿ ಎನಿಸುವಾಗ ನಿಮ್ಮ ಬಾಲ್ಯದ ಆತ್ಮೀಯ ಸ್ನೇಹಿತರ ಪುನರಾಗಮನ ಜೀವನದ ಇಳಿಸಂಜೆಗೆ ಒಂದು ರೀತಿಯ ಉತ್ಸಾಹದ/ಹೊಸ ಚೇತನದ ರಂಗು ತುಂಬಿಬಿಡುತ್ತೆ......

ಬಹುಶಃ ಶ್ರಾವಣೀ - ಶ್ಯಾಮ್ ಗೆ ಕೂಡ ನನ್ನ ಹಾಗೆ ಮಕ್ಕಳಿದ್ದು ವಿದೇಶಗಳಲ್ಲಿ ನೆಲೆಸಿರಬಹುದು...ಅವಳಿಗೂ ಅಲ್ಲಲ್ಲಿ ತಲೆಕೂದಲು ಬೆಳ್ಳಗಾಗಿರಬಹುದೇನೋ,.......ಹೀಗೆ ಯೋಚನೆಗಳ ಮಹಾಪೂರದಲ್ಲಿ ನಾನಿರುವಾಗ ಎಲ್ಲದಕ್ಕೂ ಉತ್ತರವೋ ಎಂಬಂತೆ ಎದುರಿಗೆ ನಿಂತಿದ್ದಳು ಶ್ರಾವಿ...

ಬೀಸುತಿದ್ದ ತಂಪಾದ ಗಾಳಿ ತುಂಬಾ ಕಾಲದ ನಂತರ ಸಿಕ್ಕ ಆನಂದವನ್ನು ಇಮ್ಮುಡಿಗೊಳಿಸುತಿತ್ತು,...ತುಂಬಾ ದಿನಗಳ ನಂತರ ಸಿಕ್ಕಿದರೆ Flashback ಗೆ ಹೋಗೊದು ಸಹಜ ಅಲ್ಲವಾ!!? ಹಾಗೆ ನಾವು ನೆನಪುಗಳ ರಾಶಿ ಹಾಕಿಕೊಂಡು ಒಂದೊಂದಾಗಿ ಮೆಲಕು ಹಾಕುತ್ತಿರುವಾಗ ತಟ್ಟನೆ ನೆನಪಾಗಿದ್ದು ಶ್ಯಾಮ್ ,"ಶ್ರಾವಿ ನಿನ್ನ ಶ್ಯಾಮ್ ಹೇಗಿದ್ದಾನೆ? ನಿನ್ನ ಮದುವೆಗೂ ಕರೆದಿಲ್ಲ......ಹೀಗೆ ಪ್ರೀತಿಯ ಬ್ಯೆಗುಳ ಸಾಗುತ್ತಲಿತ್ತು ಅಡೆತಡೆ ಇಲ್ಲದೆ...

ಮಧ್ಯದಲ್ಲೆ ಮಾತನ್ನು ತುಂಡರಿಸಿದ ಅವಳು "ನನ್ನ ಮತ್ತು ಶ್ಯಾಮ್ ಮದುವೆ ಅಗಲಿಲ್ಲ ಶರು,ಅವನು ಈಗ ಎಲ್ಲಿದ್ದಾನೋ ,ಹೇಗಿದ್ದಾನೋ ಎನು ನನಗೆ ಗೊತ್ತಿಲ್ಲ...ಅವನು ನನ್ನನ್ನು ಬಿಟ್ಟುಹೋದ ಕಾರಣ ಕೂಡ ನನಗೆ ತಿಳಿದಿಲ್ಲ...ನಾನೂ ಬೇರೆ ಯಾರನ್ನೂ ಮದುವೆ ಆಗಿಲ್ಲ...social work ನನಗೆ ನೆಮ್ಮದಿ, ಸಂತೋಷ,ಈ ಬದುಕಿಗೊಂದು ಬೆಲೆ ಕೊಟ್ಟಿದೆ..ಆದರೆ ನಮ್ಮಿಬ್ಬರ ಅಷ್ಟು ವರ್ಷಗಳ ಒಡನಾಟದಿಂದ ಹೇಳಬಲ್ಲೆ ಶ್ಯಾಮ್ ನನ್ನನ್ನು ಬಿಟ್ಟು ಹೋಗಿದ್ದು ಕೂಡ ಏನೋ ಬಲವಾದ ಅನಿವಾರ್ಯತೆಯೋ ಅಥವಾ ಕರ್ತವ್ಯ ಕಾರಣ..ಅವನಿಗೆ ಈಗ ಮದುವೆ ಅಗಿದ್ದರೂ,ಮಕ್ಕಳಿದ್ದರೂ,ಎಷ್ಟೇ ಸಂತೋಷವಾಗಿದ್ದರೂ,ಒಮ್ಮೆ ಕಣ್ಣಲ್ಲಿ ನೀರು ಬಂದರೆ ಅದು ಈ "ಶ್ರಾವಿ"ಗಾಗಿ ಮಾತ್ರ..." ಎಂದು ಮುಗುಳ್ನಕ್ಕಳು.
ಅವಳ ಮಾತಿನಿಂದ shock ಆಗಿದ್ದು ನನಗೆ "ಅಲ್ಲಾ ಈ ರೀತಿಯ ಪ್ರೀತಿ ಇರಲು ಸಾಧ್ಯವಾ,ಈ ಮಟ್ಟದ ನಂಬಿಕೆ !!...ಶ್ರಾವಿ ಇದೆಂತಾ ಪ್ರೀತಿ ನಿನ್ನದು!?"

"
ನನ್ನ ಪ್ರೀತಿ ರಾಧೆಯ ಪ್ರೀತಿಯ ರೀತಿ ಶರು,ನಿನ್ನನ್ನೆ ನೊಡು ಎಲ್ಲವು ಇದೆ ನಿನಗೆ ಆದರೆ ಎನೂ ಇಲ್ಲದ ಹಾಗೆ ವ್ರದ್ಧಾಶ್ರಮದಲ್ಲಿ
ಇದ್ದೀಯಾ...,ಗಂಡ/ಹೆಂಡತಿ,ಮಕ್ಕಳು..etc ಎಲ್ಲರ ಪಾತ್ರ ಪ್ರತಿಯೊಬ್ಬರ ಜೀವನದಲ್ಲಿ ಇಷ್ಟಿಷ್ಟು ಕಾಲ ಮಾತ್ರ.ಅವರ ಪಾತ್ರ ನಮ್ಮ ಜೀವನದಲ್ಲಿ ಅಷ್ಟೇ ದಿನ..ಅವರ ಪಾತ್ರ ಮುಗಿದಮೇಲೆ ಅಲ್ಲಿ ಇನ್ನು ಬೆರೆ ಯಾವುದೋ ಪಾತ್ರ ಬರಬಹುದು ಅಥವಾ ಹಾಗೆಯೂ ಇರಬಹುದು,ಇದು ಶ್ರೀಕೃಷ್ಣನಿಗೆ ಅಗಲಿ ರಾಧೆಗೆ ಅಗಲಿ ತಪ್ಪಿಲ್ಲ..ಬಹುಷಃ ಕರ್ತವ್ಯದ ಅನಿವಾರ್ಯತೆಯೋ ಅಥವಾ ಪ್ರೀತಿ ಹೀಗೂ ಇರಬಲ್ಲದು ಅಥವಾ ಪ್ರೀತಿಗೆ ಮತ್ತೊಂದು ವಿಶಿಷ್ಟತೆ ಗರಿಗೇರಿಸಲೋ ರಾಧೆಯಿಂದ ದೂರವಾದ ಶ್ರೀಕೃಷ್ಣ….."ಎನ್ನುತ್ತಾ ಮೌನವಾದವಳನ್ನು ನೋಡಿದರೆ ಕಡಲಿನ ಸಹಜತೆ,ವಿಶಾಲತೆ ಮುಖದಲ್ಲಿ ಪ್ರತಿಫಲಿಸುತ್ತಿತ್ತು...

ಶ್ರೀಕೃಷ್ಣ  ಅಷ್ಟೋಂದು  ಪತ್ನಿಯರು,ಮಕ್ಕಳು,ರಾಜ್ಯ,ಸ್ನೇಹಿತರು ಇಷ್ಟೇಲ್ಲಾ ಸುಖಗಳ ಮಧ್ಯದಲ್ಲಿ ಕಣ್ಣೀರು ಇಟ್ಟಿರಬಹುದೇ!!!? ಒಂದೊಮ್ಮೆ ಇಟ್ಟಿದ್ದರೂ ಅದು ಅವನ ರಾಧೆಗಾಗಿ ಮಾತ್ರವೇ !!? ಅಥವಾ ಮುಂದಿನ ಜೀವನವನ್ನು ಸಮರ್ಥವಾಗಿ ಎದುರಿಸಲು ರಾಧೆ ತನಗೆ ತಾನೇ ಮಾಡಿಕೊಂಡ ಸಾಂತ್ವನವಿರಬಹುದೇ!!!? ಅಥವಾ ಪ್ರೀತಿಗೆ ನಂಬಿಕೆಯೆ ಬುನಾದಿ ಎನ್ನುವಂತೆ ಇದು ಕೇವಲ ರಾಧೆಯ ನಂಬಿಕೆಯೋ!!!?.....ಹಿಗೆ ನನ್ನ ಮನಸ್ಸಿನಲ್ಲಿ ನೂರಾರು ತಳಮಳಗಳ/ಪ್ರಶ್ನೆಗಳ ಅಲೆಗಳ ಹೊರಾಟ ತಾ ಮುಂದು ತಾ ಮುಂದು ಎಂದು.....

ಇದು ಬಹುಷಃ ನನ್ನಂತಹ ಸಾಮಾನ್ಯಳಿಗೆ ಪೂರ್ಣವಾಗಿ ಅರ್ಥವಾಗದ್ದು ಏಕೆಂದರೆ ಇದು ರಾಧೆಯ ಪ್ರೀತಿಯ ರೀತಿ,
ತೊರೆದರು ತನ್ನ ತೊರೆಯದು ಪ್ರಿಯನಾ.........ಇದು ರಾಧೆಯ ಪ್ರೀತಿಯ ರೀತಿ......